ಮನೋರಮಾ ಎಂ ಭಟ್ ಇವರು ಕನ್ನಡದ ಲೇಖಕಿ. ನೋಬೆಲ್ ಪ್ರಶಸ್ತಿ ವಿಜೇತ ಅರ್ನೆಸ್ ಹೇಮಿಂಗ್ವೇಯ ಕಾದಂಬರಿ 'ಓಲ್ದ್ ಮ್ಯಾನ್ ಆಂಡ್ ದ ಸಿ'-ಇದರ ರೇಡಿಯೋ ನಾಟಕವನ್ನು ಕೇಳಿದ ಮನೋರಮಾರಿಗೆ ಅದೇ ಬಾನುಲಿ ಮಾಧ್ಯಮಕ್ಕೆ ಪ್ರವೇಶಿಸಲು ಈ ನಾಟಕ ಪ್ರೇರಣೆಯನ್ನೊದಗಿಸಿತು. ಮುಂದಕ್ಕೆ ಸ್ವಯಂ ಒಬ್ಬ ಕಲಾವಿದೆಯಾಗಿ,ನಿರ್ದೇಶಕಿಯಾಗಿ,ರಂಗಕಲಾವಿದೆಯಾಗಿ,ಕತೆಗಾರ್ತಿಯಾಗಿ ತಮ್ಮನ್ನು ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಇವರು ದಕ್ಷಿಣ ಕನ್ನಡದ ಹಿರಿಯ ಲೇಖಕಿ. == ಜೀವನ == ಮನೋರಮಾ ತನ್ನ ೨೦ನೇ ವಯಸ್ಸಿನಲ್ಲಿ ಮುಳಿಯ ಮಹಾಬಲ ಭಟ್ಟರನ್ನು ಮದುವೆಯಾದರು.ಮುಳಿಯ ಮಹಾಬಲ ಭಟ್ಟರು ನ್ಯಾಯವಾದಿಯಾಗಿದ್ದರು.ಮಹಾಬಲರಿಗೂ ಈ ಸಾಹಿತ್ಯದ ಒಲವು ಇದ್ದುದರಿಂದ ಹಾಗೂ ಶಾಲಾದಿನಗಳಲ್ಲೇ ಮನೋರಮಾ ಅವರಲ್ಲಿ ಬೇರೂರಿದ್ದ ಅಭಿನಯಕಲೆ, ಬರವಣಿಗೆಯ ಹವ್ಯಾಸ ಮದುವೆಯ ನಂತರ ನಾಟಕ, ಕತೆ ರಚನೆಯ ಮೂಲಕ ಬೆಳಕಿಗೆ ಬಂದಿತು.ಮನೋರಮಾರಿಗೆ ಇಬ್ಬರು ಗಂಡು ಮಕ್ಕಳು. ದೊಡ್ಡ ಮಗ ಜಯರಾಮ, ಎರಡನೇ ಮಗ ಮಹೇಶ. == ವಿದ್ಯಾಭ್ಯಾಸ == ಮನೋರಮಾ ತನ್ನ ಪ್ರಾಥಮಿಕ ಶಿಕ್ಷಣವನ್ನು ಪುತ್ತೂರಿನ ಬೊಳುವಾರು ಶಾಲೆಯಲ್ಲಿ ಮುಗಿಸಿದರು.ನಂತರ ತಮ್ಮ ಹೈಸ್ಕೂಲ್ ಶಿಕ್ಷಣವನ್ನು ಸಂತ ವಿಕ್ಟರ್ ಹುಡುಗಿಯರ ಶಾಲೆಯಲ್ಲಿ ಆಂಗ್ಲಮಾಧ್ಯಮದಲ್ಲಿ ಪಡೆದರು. == ಆಸಕ್ತಿ == ಸಂಗೀತದಲ್ಲಿ, ನೃತ್ಯದಲ್ಲಿ, ನಾಟಕ ರಚನೆಯಲ್ಲಿ, ಅಭಿನಯದಲ್ಲಿ ತುಂಬ ಆಸಕ್ತಿ ಹೊಂದಿದ್ದರು.ನೃತ್ಯವನ್ನು ಸತ್ಯಸುಂದರರಾಯರ ಮಾರ್ಗದರ್ಶನದಲ್ಲಿ ಕಲಿತರು.ನಲ್ವತ್ತಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದಾರೆ. == ಕಥಾಸಂಕಲನಗಳು == ಮೊದಲ ಕಥಾಸಂಕಲನ "ಮೋತಿ ಪಾಠ ಕಲಿಸಿತ್ತು" ಎರಡನೆ ಕಥಾಸಂಕಲನ "ಶಬ್ದಗಳಾಗದ ಧ್ವನಿಗಳು" == ನಾಟಕಗಳು == ಅಜ್ಜಿ ಹೇಳಿದ ಕಥೆ ಇಂದಲ್ಲ ನಾಳೆ ಮರದ ಕಥೆ ಋಣಾನುಬಂಧ ಚಂದ್ರಮತಿಯ ಕನಸು == ನಾಟಕ ಸಂಕಲನಗಳು == ಹೊಸಹಾದಿ ಬಲಿ ನಿರ್ಧಾರ ಆಯ್ಕೆ == ಇತರ ಮಾಹಿತಿಗಳು == ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ "ಗುಲಾಬಿ ಟಾಕೀಸು"ಚಲನಚಿತ್ರದಲ್ಲಿ ಪುಟ್ಟ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ೧೯೮೭ರಲ್ಲಿ ಸ್ಥಾಪನೆಯಾದ ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷೆಯಾಗಿ, ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು 'ಸಾಧನಾ' ಸಾಹಿತ್ಯಿಕ-ಸಾಂಸ್ಕೃತಿಕ ಬಳಗದ ಸದಸ್ಯೆ,.ಡಾ.ಶಿವರಾಮ ಕಾರಂತರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಸಾಧನಾ ವತಿಯಿಂದ ಮಂಗಳೂರು,'ಪುತ್ತೂರು ಮತ್ತು ಕೋಟದಲ್ಲಿ ಕಾರಂತರ ಗೀತನಾಟಕ 'ಕಿಸಾ ಗೋತಮಿ'ಪಾತ್ರವನ್ನು ನಿರ್ವಹಿಸಿದ್ದಾರೆ. == ಪ್ರಶಸ್ತಿಗಳು == ಅತ್ತಿಮಬ್ಬೆ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ ಹೊಸಬಾಳೆ ಅನಂತಪ್ಪ ಸೇವಾ ಪುರಸ್ಕಾರ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಂಸ್ಕಾರ ಭಾರತಿ ಪ್ರಶಸ್ತಿ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ == ಉಲ್ಲೇಖ ==